ಪುಟಗಳು

ಬುಧವಾರ, ಜನವರಿ 12, 2011

ಸಂಕ್ರಾಂತಿ ಸ್ಪೆಶಲ್

ಜನವರಿ ೧೪ ರಂದು ಮಕರ ಸಂಕ್ರಾಂತಿ. ದೇಶದಾದ್ಯಂತ ವಿವಿಧ ರೀತಿಯಲ್ಲಿ ಆಚರಿಸುವ ವಿಶೇಷ ಹಬ್ಬ. ಕರ್ನಾಟಕದಲ್ಲಿ ಎಲ್ಲಾ ಕಡೆ ಅತ್ಯಂತ ಸಡಗರದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಸ್ನೇಹಿತರಿಗೆ, ನೆರೆಯವರಿಗೆ ಎಳ್ಳು ಬೆಲ್ಲ ಬೀರಿ ಹಬ್ಬದ ಶುಭಾಶಯ ತಿಳಿಸುವುದು ವಾಡಿಕೆ.ಎಳ್ಳು ಬೆಲ್ಲ ತಿಂದು ನೀವೆಲ್ಲರೂ ಒಳ್ಳೇದನ್ನೇ ಮಾತನಾಡಿ.

ಈ ಹಬ್ಬಕ್ಕೋಸ್ಕರ ಎರಡು ತಿಂಡಿಗಳನ್ನು ಮಾಡುವ ವಿಧಾನ ಇಲ್ಲಿದೆ....

ಪೊಂಗಲ್

ಬೇಕಾದ ಸಾಮಗ್ರಿಗಳು

ಅಕ್ಕಿ 1 ಕಪ್
ಬೆಲ್ಲದ ಹುಡಿ  1-1/4 ಕಪ್
ಹೆಸರು ಬೇಳೆ 1/2 ಕಪ್
ತುಪ್ಪ 1/4 ಕಪ್
ಒಣ ದ್ರಾಕ್ಷಿ -2 ಚಮಚ
ಗೋಡಂಬಿ - 3 ಚಮಚ
ಏಲಕ್ಕಿ ಪುಡಿ -ಸ್ವಲ್ಪ
ಕೊಬ್ಬರಿ ಸಣ್ಣಕ್ಕೆ ಕಟ್ ಮಾಡಿದ ತುಂಡುಗಳು ೪ ಚಮಚ

ಮಾಡುವ ವಿಧಾನ: ಮೊದಲಿಗೆ ಅಕ್ಕಿ, ಬೇಳೆಯನ್ನು 2 ನಿಮಿಷ  ಬಾಣಲೆಯಲ್ಲಿ ಹುರಿಯಿರಿ (ಎಣ್ಣೆ ಹಾಕದೆ). ಇದು ತಣಿದ ನಂತರ ಎರಡು ಸಲ ತೊಳೆಯಿರಿ,
ಮತ್ತೆ ಕುಕ್ಕರಿನಲ್ಲಿ  ಎರಡನ್ನೂ ಜೊತೆಗೆ ಹಾಕಿ  4 1/2 ಕಪ್ ನೀರು ಹಾಕಿ 3 ವಿಸಲ್ ಬಂದ ನಂತರ ಸ್ಟೌವ್ ಆಫ್ ಮಾಡಿ. ಈಗ ದ್ರಾಕ್ಷಿ, ಗೋಡಂಬಿ, ಕೊಬ್ಬರಿ ಸ್ವಲ್ಪ ತುಪ್ಪದಲ್ಲಿ ಕರಿದು ಇಟ್ಟುಕೊಳ್ಳಿ.
ಇನ್ನೊಂದು ಪಾತ್ರೆಯಲ್ಲಿ ಪುಡಿ ಮಾಡಿದ ಬೆಲ್ಲ ಹಾಕಿ, ಅದಕ್ಕೆ 1 ಕಪ್ ನೀರು ಹಾಕಿ ಬಿಸಿಮಾಡಿ ಕರಗಿಸಿ, ನಂತರ ಸೋಸಿ. ಈಗ ಕರಗಿಸಿದ ಬೆಲ್ಲವನ್ನು ಪಾತ್ರೆಗೆ ಹಾಕಿ ಕುದಿಸಿ. ಒಂದು ಎಳೆ ಪಾಕ ಬಂದ ನಂತರ (ನೂಲು ತರಹ ಎಳೆ ಬರಬೇಕು), ಬೇಯಿಸಿಟ್ಟ ಅಕ್ಕಿ, ಬೇಳೆಯನ್ನು ಪಾಕಕ್ಕೆ ಹಾಕಿ ಕಲಸಿ, ಇನ್ನು, ತುಪ್ಪ, ಕರಿದಿಟ್ಟುಕೊಂಡ ಕೊಬ್ಬರಿ, ಗೋಡಂಬಿ, ದ್ರಾಕ್ಷಿ ಹಾಕಿ ಪುನ: ಚೆನ್ನಾಗಿ ಕಲಸಿ, ಇದರೊಟ್ಟಿಗೆ ಏಲಕ್ಕಿ ಪುಡಿ ಸಹ ಹಾಕಿ. ಸಿಹಿ ಸಿಹಿಯಾದ ಸ್ವಾದಿಷ್ಟ ಪೊಂಗಲ್ ರೆಡಿ. ಬಿಸಿಬಿಸಿ ತಿಂದರೆ ರುಚಿ ಜಾಸ್ತಿ.


ಬೆಂಗಳೂರು ಆಂಬೊಡೆ

ಕಡಲೆಬೇಳೆ 1 ಕಪ್
ಈರುಳ್ಳಿ 2
ಹಸಿಮೆಣಸು 3 ಅಥವಾ 4
ಕರಿಬೇವು 3 ಚಮಚ (ಸಣ್ಣಗೆ ಹೆಚ್ಚಿದ್ದು)
ಪುದಿನ 3 ಚಮಚ (ಸಣ್ಣಗೆ ಹೆಚ್ಚಿದ್ದು)
ಶುಂಠಿ 1 ಇಂಚು
(ಬೇಕಾದರೆ 2 ಬೆಳ್ಳುಳ್ಳಿ ಎಸಳು)
 ಕಟ್ ಮಾಡಿದ ಹಸಿಕೊಬ್ಬರಿ 2 ಚಮಚ
ಇಂಗು
ಉಪ್ಪು

ಮಾಡುವ ವಿಧಾನ: ಕಡಲೆಬೇಳೆ 2 ಗಂಟೆ ನೆನೆಸಿಡಿ. ಮೊದಲಿಗೆ ಶುಂಠಿ, ಹಸಿಮೆಣಸು (ಬೇಕಾದರೆ 2 ಬೆಳ್ಳುಳ್ಳಿ ಎಸಳು) ಜೊತೆಗೆ ರುಬ್ಬಿಕೊಳ್ಳಿ (ತುಂಬಾ ಪೇಸ್ಟ್ ಆಗುವುದು ಬೇಡ)
ಅದನ್ನು ತೆಗೆದು ಬೌಲ್ ಗೆ ಹಾಕಿಕೊಳ್ಳಿ. ನಂತರ ಕಡಲೆಬೇಳೆಯನ್ನು ನೀರಿನಿಂದ ತೆಗೆದು ತರಿತರಿಯಾಗಿ ರುಬ್ಬಿ ತೆಗೆದಿಟ್ಟುಕ್ಕೊಳ್ಳಿ. ಈ ತರಿಯೊಟ್ಟಿಗೆ ಶುಂಠಿಯ ಪೇಸ್ಟ್ ಹಾಕಿ,
ಇದರೊಟ್ಟಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ತೆಂಗಿನಕಾಯಿ, ಕರಿಬೇವು, ಪುದಿನ, ಉಪ್ಪು, ಇಂಗು ಎಲ್ಲವನ್ನು ಹಾಕಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ (ನೀರು ಹಾಕಬೇಡಿ). ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ (ಮೀಡಿಯಂ flame). ಈಗ ಕಲಸಿ ಇಟ್ಟು ಕೊಂಡ ಆಂಬೊಡೆ ಮಿಕ್ಸ್ ನ್ನು ಸಣ್ಣ ನಿಂಬೆ ಹಣ್ಣಿನ ಗಾತ್ರದಲ್ಲಿ ತೆಗೆದುಕೊಂಡು ಅಂಗೈಯಲ್ಲಿ ತಟ್ಟಿ ಕಾದ ಎಣ್ಣೆಗೆ ಹಾಕಿ ಕರಿಯಿರಿ (ಕಂದು ಬಣ್ಣಕ್ಕೆ ತಿರುಗುವ ತನಕ). ಎಣ್ಣೆಯಿಂದ ತೆಗೆದು ಸ್ವಲ್ಪ ತಣಿದ ನಂತರ ಗರಿಗರಿಯಾದ ಆಂಬೊಡೆ ನೀವೂ ತಿನ್ನಿ, ಪ್ರಿಯರಿಗೂ ತಿನ್ನಿಸಿ. ಚಳಿಗಾಲದಲ್ಲಿ ಕಾಫಿ ಯಾ ..... ಜೊತೆ ತಿನ್ನಲು ಬಹಳ ಖುಶಿ.
(ಕಡಲೆಬೇಳೆ ವಾಯುವಾದ ಕಾರಣ  ಬೆಳ್ಳುಳ್ಳಿ ಹಾಕಿ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಪುದಿನ ಸೊಪ್ಪಿನ ಬದಲು ಸಬ್ಬಕ್ಕಿ ಸೊಪ್ಪು ಕೂಡಾ ಹಾಕಬಹುದು)

1 ಕಾಮೆಂಟ್‌: